ವಿಷಾದದ ವಿಷಮ ಗಳಿಗೆಯೊಳು
ಗಾಳಿಯಂತೆ ತೂರಿ ಹೋದ ಭಾವನೆಗಳಿಗೆ
ಹೊಸ ಭಾವ ನೀಡುವ ಬಯಕೆ.
ಕಾಣುವುದೇ ಹೊಸ ಚಿಗುರು,
ಕುಡಿಯೊಡೆಯುವುದೇ ಮೊಳಕೆ,
ಕಾತರದಿ ಕಾದಿದೆ ಮನವು.
ಕಾಣದ ಬಣ್ಣಗಳ ಅರಸಿ ಹೊರಟ
ಬದುಕು ಸಾಗಿದೆ ಎತ್ತ?
ಚಿತ್ತದಿ ಹೊಳೆದಿತ್ತು ಆ ಸುಂದರ
ಮುಂಜಾವಿನ ನೆನಹು...
ಮಂಜು ಮುಸುಕಿರಲು, ಮಾಸಿದ
ಮೋಡಗಳ ನಡುವಿಂದ
ಹೊರಹೊಮ್ಮಿದಾಗ ನೇಸರ
ಮಿನುಗಿತ್ತು ಧರೆ...
ಚರಿತ್ರ...
Tuesday, March 11, 2008
Subscribe to:
Post Comments (Atom)
2 comments:
ಬದುಕಿನ ಬೆನ್ನೇರಿ ಹೊರಟಿರುವ ನಿನಗೆ ನನ್ನ ಶುಭಾಶಯ...
ಪ್ರಿತಿಯಿಂದ...
ಸುನಿಲ್ ಹೆಗ್ಡೆ..
ಚೆನ್ನಾಗಿದೆ...ಇನ್ನೂ ಹೆಚ್ಚಿನ ಪ್ರಯತ್ನ ಮುಂದುವರಿಸಿರಿ... ಶುಭಾಷಯಗಳು....
ಹರೀಶ್ ಕೆ. ಆದೂರು.
Post a Comment